ಪುಟ್ಟ ಹೆಜ್ಜೆಗೆ ಹೆಜ್ಜೆ ಜೋಡಿಸುತ್ತಾ
ಹಿಡಿದ ಕೊಡೆಯು ಹನಿಯ ಸುರಿಸುತಿರೆ
ನಾಗರಿಕತೆಯ ಮರೀಚಿಕೆಯಲ್ಲಿ
ಕಳೆದುಹೋದ ಮನಸ್ಸು
ಮರಳುತ್ತಿದೆ ಜ್ಞಾಪಕ ಚಿತ್ರ ಶಾಲೆಗೆ
ನಾಗರಿಕತೆಯ ಮರೀಚಿಕೆಯಲ್ಲಿ
ಕಳೆದುಹೋದ ಮನಸ್ಸು
ಮರಳುತ್ತಿದೆ ಜ್ಞಾಪಕ ಚಿತ್ರ ಶಾಲೆಗೆ
ಅಂದು ನನ್ನಪ್ಪನ ಕೊಡೆಯಲ್ಲಿ
ಇಣುಕುತ್ತಿದ್ದ ನೆತ್ತಿ ಮೇಲಿನ ನೇಸರ
ಇಂದು ನಾನು ಹಿಡಿದ ಛತ್ರಿಯಲಿ
ಬಣ್ಣಗಳ ಚಿತ್ತಾರ
ಕೆತ್ತುತ್ತಿವೆ ಕನಸುಗಳ ರಂಗೋಲಿ
ಇಣುಕುತ್ತಿದ್ದ ನೆತ್ತಿ ಮೇಲಿನ ನೇಸರ
ಇಂದು ನಾನು ಹಿಡಿದ ಛತ್ರಿಯಲಿ
ಬಣ್ಣಗಳ ಚಿತ್ತಾರ
ಕೆತ್ತುತ್ತಿವೆ ಕನಸುಗಳ ರಂಗೋಲಿ
ನನ್ನಪ್ಪನ ನೇಗಿಲ ರೇಖೆಗಳಲ್ಲಿ
ಅವನ ಅಂಗೈ ರೇಖೆಗಳು ಮಟಮಾಯ
ತೇಪೆ ಹಾಕಿದ ಕೊಡೆ ಹಿಡಿದ ನನ್ನಪ್ಪ
ಗೋವರ್ಧನಗಿರಿಯೆಂಬ ನನ್ನಮ್ಮನ
ಮುಂದೆ ಮಂಕಾಗಿಬಿಟ್ಟ
ಹೇಳ ಹೆಸರಿಲ್ಲದೆ ಉಳಿದು ಬಿಟ್ಟ
ಅವನ ಅಂಗೈ ರೇಖೆಗಳು ಮಟಮಾಯ
ತೇಪೆ ಹಾಕಿದ ಕೊಡೆ ಹಿಡಿದ ನನ್ನಪ್ಪ
ಗೋವರ್ಧನಗಿರಿಯೆಂಬ ನನ್ನಮ್ಮನ
ಮುಂದೆ ಮಂಕಾಗಿಬಿಟ್ಟ
ಹೇಳ ಹೆಸರಿಲ್ಲದೆ ಉಳಿದು ಬಿಟ್ಟ
ನನ್ನಪ್ಪ ನಯ ನಾಜೂಕಿನ ಮನುಷ್ಯನಲ್ಲ
ಭೂತಾಯ ಧೂಳನ್ನು ವಿಭೂತಿ ಎಂದವನು
ಬೆವರಲ್ಲಿಯೇ ಸ್ನಾನವನು ಮಾಡಿದವನು
ತಪ್ಪು ಮಾಡಿ ಬೆಪ್ಪನಾಗಬೇಡೆಂದು
ನನ್ನ ಜೀವನ ಒಪ್ಪ ಮಾಡುವುದರಲ್ಲಿಯೇ
ಗಾಣದೆತ್ತಿನ ಹಾಗೆ ಸವೆದವನು
ಎಲೆಮರೆಯ ಕಾಯಂತೆ ಉಳಿದವನು
ಭೂತಾಯ ಧೂಳನ್ನು ವಿಭೂತಿ ಎಂದವನು
ಬೆವರಲ್ಲಿಯೇ ಸ್ನಾನವನು ಮಾಡಿದವನು
ತಪ್ಪು ಮಾಡಿ ಬೆಪ್ಪನಾಗಬೇಡೆಂದು
ನನ್ನ ಜೀವನ ಒಪ್ಪ ಮಾಡುವುದರಲ್ಲಿಯೇ
ಗಾಣದೆತ್ತಿನ ಹಾಗೆ ಸವೆದವನು
ಎಲೆಮರೆಯ ಕಾಯಂತೆ ಉಳಿದವನು
ನನ್ನಪ್ಪ ತನಗಾಗಿ ಬದುಕಿದ್ದೇ ಇಲ್ಲ
ನಮಗಾಗಿ ದುಡಿದಿದ್ದೇ ಎಲ್ಲಾ
ಅಮ್ಮನೆಂಬ ಬಂಧದಲ್ಲಿ ಗೌಣವಾಗಿಬಿಟ್ಟ
ಆದರೂ ಕನಸುಗಳ ಕೋಟೆ ಕಟ್ಟಿಕೊಂಡ
ಅದು ಗೆದ್ದಲು ಕಟ್ಟಿದ ಹುತ್ತವೆಂದು
ನನ್ನಪ್ಪನಿಗೆ ತಿಳಿಯಲಿಲ್ಲವೇನೋ
ನಮಗಾಗಿ ದುಡಿದಿದ್ದೇ ಎಲ್ಲಾ
ಅಮ್ಮನೆಂಬ ಬಂಧದಲ್ಲಿ ಗೌಣವಾಗಿಬಿಟ್ಟ
ಆದರೂ ಕನಸುಗಳ ಕೋಟೆ ಕಟ್ಟಿಕೊಂಡ
ಅದು ಗೆದ್ದಲು ಕಟ್ಟಿದ ಹುತ್ತವೆಂದು
ನನ್ನಪ್ಪನಿಗೆ ತಿಳಿಯಲಿಲ್ಲವೇನೋ
ಕಾರಣ ನನ್ನಪ್ಪನ ಆದರ್ಶಗಳು
ಅಜ್ಜ ಹಾಕಿದ ಆಲದ ಮರ
ಆಲದ ಮರದಲ್ಲಿ ಆಸರೆ ಪಡೆದ ಹಕ್ಕಿಗಳೆಷ್ಟೊ
ಕೊಂಬೆ ಕೊಂಬೆಗೆ ಜೋತುಬಿದ್ದ ಗೂಡುಗಳೆಷ್ಟೊ
ರೆಕ್ಕೆ ಬಲಿತ ಹಕ್ಕಿಗಳು ಎತ್ತೆತ್ತಲೋ ಹಾರಿಹೋದವು
ನನ್ನಪ್ಪನ ಕನಸುಗಳು ನಗರಕ್ಕೆ ಹಾರಿದವು
ನನ್ನ ಕನಸಿನ ಹಕ್ಕಿಯು
ಇನ್ನು ವಿದೇಶಕ್ಕೆ ಹಾರದೆ ಇದ್ದೀತೆ
ಅಜ್ಜ ಹಾಕಿದ ಆಲದ ಮರ
ಆಲದ ಮರದಲ್ಲಿ ಆಸರೆ ಪಡೆದ ಹಕ್ಕಿಗಳೆಷ್ಟೊ
ಕೊಂಬೆ ಕೊಂಬೆಗೆ ಜೋತುಬಿದ್ದ ಗೂಡುಗಳೆಷ್ಟೊ
ರೆಕ್ಕೆ ಬಲಿತ ಹಕ್ಕಿಗಳು ಎತ್ತೆತ್ತಲೋ ಹಾರಿಹೋದವು
ನನ್ನಪ್ಪನ ಕನಸುಗಳು ನಗರಕ್ಕೆ ಹಾರಿದವು
ನನ್ನ ಕನಸಿನ ಹಕ್ಕಿಯು
ಇನ್ನು ವಿದೇಶಕ್ಕೆ ಹಾರದೆ ಇದ್ದೀತೆ
ಅಪ್ಪ ಈಗ ಆಕಾಶ ಮಾತ್ರ
ನಿತ್ಯ ಮಳೆಯಲಿ ತೋಯುತಿಹನು
ಕೊಡೆಯ ಅಂಚಲಿ ಹನಿಯ ಸುರಿಸುತಿಹನು
ತನ್ನ ಕಣ್ಣ ಹನಿಯ ಕಾಣದಿರಲೆಂದು
ನಿತ್ಯ ಮಳೆಯ ಕೋರುತಿಹನು
ಅಪ್ಪನಿಡಿದ ಕೊಡೆಯು ಸಂಬಂಧಗಳ
ಕೊಂಡಿಯ ಬೆಸೆಯುತಿದೆ
ಭರವಸೆಯ ಬಂಡಿಯ ನಡೆಸುತ್ತಿದೆ
ನಿತ್ಯ ಮಳೆಯಲಿ ತೋಯುತಿಹನು
ಕೊಡೆಯ ಅಂಚಲಿ ಹನಿಯ ಸುರಿಸುತಿಹನು
ತನ್ನ ಕಣ್ಣ ಹನಿಯ ಕಾಣದಿರಲೆಂದು
ನಿತ್ಯ ಮಳೆಯ ಕೋರುತಿಹನು
ಅಪ್ಪನಿಡಿದ ಕೊಡೆಯು ಸಂಬಂಧಗಳ
ಕೊಂಡಿಯ ಬೆಸೆಯುತಿದೆ
ಭರವಸೆಯ ಬಂಡಿಯ ನಡೆಸುತ್ತಿದೆ
ಶ್ರೀಮತಿ ಪದ್ಮಾವತಿ ಸಿ.
ಸಹಾಯಕ ಪ್ರೌಢಶಾಲಾ ಶಿಕ್ಷಕಿ
ಸರ್ಕಾರಿ ಪ್ರೌಢ ಶಾಲೆ, ಶಾಪೂರು
ಕೋಲಾರ ತಾಲ್ಲೂಕು
No comments:
Post a Comment