Friday, December 12, 2014

ಭೈರಪ್ಪಗೆ ರಾಷ್ಟ್ರೀಯ ಪ್ರೊಫೆಸರ್‌ ಗೌರವ

ನವದೆಹಲಿ ಹಿರಿಯ ಸಾಹಿತಿ ಎಸ್‌. ಎಲ್‌. ಭೈರಪ್ಪ ಅವರನ್ನುರಾಷ್ಟ್ರೀಯ ಸಂಶೋ­ಧನಾ ಪ್ರೊಫೆಸರ್‌’ ಎಂದು ನೇಮಕ ಮಾಡ­ಲಾಗುವು­ದೆಂದು  ಮಾನವ ಸಂಪ­ನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಬುಧವಾರ ಅಳಿ­ವಿನ ಅಂಚಿನಲ್ಲಿರುವ  ಉಪಭಾಷೆಗಳ ರಕ್ಷಣೆ  ಹಾಗೂ ಸಾಹಿತ್ಯದಲ್ಲಿ ಅನು­ವಾದ ಕಾರ್ಯದ ಕುರಿತು ಹೇಳಿಕೆ ನೀಡಿದ ಸಚಿವೆ ಇರಾನಿ, ಭೈರಪ್ಪ ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಗಮನದಲ್ಲಿ­ಟ್ಟುಕೊಂಡು ಗೌರವ ಸಲ್ಲಿಸಲಾಗುತ್ತಿದೆ ಎಂದರುಮುಂಬೈ ಉತ್ತರ ಕ್ಷೇತ್ರದ ಸಂಸದೆ ಪೂನಂ ಮಹಾಜನ್ಅವರು ಎತ್ತಿದ ಪ್ರಶ್ನೆಗೆ ಇರಾನಿ ಉತ್ತರಿಸುತ್ತಿದ್ದರು.


ಸಾಹಿತ್ಯದಲ್ಲಿನ ಅನುವಾದದ ಉತ್ತೇ­ಜನಕ್ಕೆ ಸರ್ಕಾರ ಯಾವ ಕ್ರಮ ಕೈಗೊಂ­ಡಿದೆ ಎಂದು ಕೇಳಿದ ಪೂನಂ ಮಹಾ­ಜನ್‌, ಭೈರಪ್ಪ ಅವರ ಕೃತಿಗಳು ಹಲವು ಭಾಷೆಗಳಿಗೆ ಅನುವಾದವಾಗಿ ಮೆಚ್ಚುಗೆ ಗಳಿಸಿದ್ದನ್ನು ಉಲ್ಲೇಖಿಸಿದರು. ಮೇಧಾವಿಗಳು, ವಿದ್ವಾಂಸರನ್ನು ಗುರು­ತಿಸಲು ಕೇಂದ್ರ ಸರ್ಕಾರ 1949­ರಲ್ಲಿಯೇರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್‌’ ಎಂಬ ಗೌರವ ಪದವಿ ನೀಡಿ ಮನ್ನಣೆ ನೀಡುತ್ತಿದೆ. ಆಯಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ, 65 ವರ್ಷ ತುಂಬಿ­ರುವ ಹಾಗೂ ಇನ್ನೂ ಸಂಶೋ­ಧನೆ ಮಾಡಬಲ್ಲ ಸಾಮರ್ಥ್ಯ ಹೊಂದಿ­ರುವ ವ್ಯಕ್ತಿಗಳಿಗೆ ಗೌರವ ನೀಡಲಾಗುತ್ತದೆ.

ಗೌರವ ಪಡೆಯುವ ವ್ಯಕ್ತಿಗಳಿಗೆ ತಿಂಗಳಿಗೆ ₨ 75,000 ಗೌರವಧನ ನೀಡಲಾಗುತ್ತದೆ ಮನ್ನಣೆಗೆ ಪಾತ್ರ­ರಾದ ವ್ಯಕ್ತಿಗಳು ಸಂಶೋಧನೆಗಾಗಿ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಅನು­ದಾನವನ್ನೂ ಪಡೆಯಬಹುದಾಗಿದೆ. ಐದು ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತಿದ್ದು, ಸರ್ಕಾರ ಬಯಸಿದಲ್ಲಿ ಮತ್ತೂ ಐದು ವರ್ಷ­ಗಳಿಗೆ ಅದನ್ನು ವಿಸ್ತರಿಸಬಹುದಾಗಿದೆ.

ಪ್ರಜಾವಾಣಿ ಸುದ್ದಿ

No comments: