Friday, December 12, 2014

ಭೈರಪ್ಪಗೆ ರಾಷ್ಟ್ರೀಯ ಪ್ರೊಫೆಸರ್‌ ಗೌರವ

ನವದೆಹಲಿ ಹಿರಿಯ ಸಾಹಿತಿ ಎಸ್‌. ಎಲ್‌. ಭೈರಪ್ಪ ಅವರನ್ನುರಾಷ್ಟ್ರೀಯ ಸಂಶೋ­ಧನಾ ಪ್ರೊಫೆಸರ್‌’ ಎಂದು ನೇಮಕ ಮಾಡ­ಲಾಗುವು­ದೆಂದು  ಮಾನವ ಸಂಪ­ನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಬುಧವಾರ ಅಳಿ­ವಿನ ಅಂಚಿನಲ್ಲಿರುವ  ಉಪಭಾಷೆಗಳ ರಕ್ಷಣೆ  ಹಾಗೂ ಸಾಹಿತ್ಯದಲ್ಲಿ ಅನು­ವಾದ ಕಾರ್ಯದ ಕುರಿತು ಹೇಳಿಕೆ ನೀಡಿದ ಸಚಿವೆ ಇರಾನಿ, ಭೈರಪ್ಪ ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಗಮನದಲ್ಲಿ­ಟ್ಟುಕೊಂಡು ಗೌರವ ಸಲ್ಲಿಸಲಾಗುತ್ತಿದೆ ಎಂದರುಮುಂಬೈ ಉತ್ತರ ಕ್ಷೇತ್ರದ ಸಂಸದೆ ಪೂನಂ ಮಹಾಜನ್ಅವರು ಎತ್ತಿದ ಪ್ರಶ್ನೆಗೆ ಇರಾನಿ ಉತ್ತರಿಸುತ್ತಿದ್ದರು.


ಸಾಹಿತ್ಯದಲ್ಲಿನ ಅನುವಾದದ ಉತ್ತೇ­ಜನಕ್ಕೆ ಸರ್ಕಾರ ಯಾವ ಕ್ರಮ ಕೈಗೊಂ­ಡಿದೆ ಎಂದು ಕೇಳಿದ ಪೂನಂ ಮಹಾ­ಜನ್‌, ಭೈರಪ್ಪ ಅವರ ಕೃತಿಗಳು ಹಲವು ಭಾಷೆಗಳಿಗೆ ಅನುವಾದವಾಗಿ ಮೆಚ್ಚುಗೆ ಗಳಿಸಿದ್ದನ್ನು ಉಲ್ಲೇಖಿಸಿದರು. ಮೇಧಾವಿಗಳು, ವಿದ್ವಾಂಸರನ್ನು ಗುರು­ತಿಸಲು ಕೇಂದ್ರ ಸರ್ಕಾರ 1949­ರಲ್ಲಿಯೇರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್‌’ ಎಂಬ ಗೌರವ ಪದವಿ ನೀಡಿ ಮನ್ನಣೆ ನೀಡುತ್ತಿದೆ. ಆಯಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ, 65 ವರ್ಷ ತುಂಬಿ­ರುವ ಹಾಗೂ ಇನ್ನೂ ಸಂಶೋ­ಧನೆ ಮಾಡಬಲ್ಲ ಸಾಮರ್ಥ್ಯ ಹೊಂದಿ­ರುವ ವ್ಯಕ್ತಿಗಳಿಗೆ ಗೌರವ ನೀಡಲಾಗುತ್ತದೆ.

ಗೌರವ ಪಡೆಯುವ ವ್ಯಕ್ತಿಗಳಿಗೆ ತಿಂಗಳಿಗೆ ₨ 75,000 ಗೌರವಧನ ನೀಡಲಾಗುತ್ತದೆ ಮನ್ನಣೆಗೆ ಪಾತ್ರ­ರಾದ ವ್ಯಕ್ತಿಗಳು ಸಂಶೋಧನೆಗಾಗಿ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಅನು­ದಾನವನ್ನೂ ಪಡೆಯಬಹುದಾಗಿದೆ. ಐದು ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತಿದ್ದು, ಸರ್ಕಾರ ಬಯಸಿದಲ್ಲಿ ಮತ್ತೂ ಐದು ವರ್ಷ­ಗಳಿಗೆ ಅದನ್ನು ವಿಸ್ತರಿಸಬಹುದಾಗಿದೆ.

ಪ್ರಜಾವಾಣಿ ಸುದ್ದಿ

Friday, December 5, 2014

ನಾಕು ತಂತಿ

ಹಲವು ವರ್ಷಗಳಿಂದ ವಿಚಿತ್ರವಾದ ಅನುಭವದೊಂದಿಗೆ ಅಪೂರ್ಣವಾಗಿ ಅರ್ಥವಾಗುತ್ತಿದ್ದ ಹಾಡು ಇವತ್ತು ದಿವ್ಯ ಅನುಭೂತಿಯನ್ನು ನನಗೆ ಧಾರೆಯೆರೆಯುತ್ತಿದೆ. ವಿಶ್ವವೆಂಬ ವಿರಾಟ್ ವೀಣೆಗೆ ಬರಿ ನಾಕು ನಾಕೆ ತಂತಿ. ನಾನು, ನೀನು, ಆನು ಮತ್ತು ತಾನು. ನಾನು ಎಂದರೆ ಗಂಡು, ನೀನು ಎಂದರೆ ಹೆಣ್ಣು, ಆನು ಎಂದರೆ ಗಂಡು ಹೆಣ್ಣಿನ ಮನೋದೈಹಿಕ ಮಿಲನದಿಂದ ಉದ್ಭವಿಸಿರುವ ಮಗು ಮತ್ತು ತಾನು ಎಂದರೆ ಮೂವರನ್ನೂ ಪೋಷಿಸುತ್ತಿರುವ ನಿಸರ್ಗ ಅಥವಾ ಸೃಷ್ಟಿಕರ್ತ. ನಾಕುತಂತಿಗಳನ್ನು ಬಿಟ್ಟರೆ ವಿಶ್ವವೆಂಬುದು ಜನ್ಮ ತಾಳುತ್ತಿರಲಿಲ್ಲ. ನಾಕುತಂತಿಗಳ ತುಡಿತವೇ ವಿಶ್ವ ವಿಕಸನಕ್ಕೆ ದಾರಿ ಮಾಡಿಕೊಟ್ಟಿದೆ. ನಾಕುತಂತಿಗಳ ಮಿಡಿತವೇ ವಿಶ್ವ ಕೇಂದ್ರಕ್ಕೆ ಭದ್ರ ಬುನಾದಿಯನ್ನು ಒದಗಿಸಿದೆ. ನಾಕುತಂತಿಗಳ ಕಲಹದಿಂದ ಸಂಭವಿಸಿರುವ ಹೋರಾಟವೇ ವಿಶ್ವದ ಇತಿಹಾಸವಾಗಿ ರೂಪಗೊಂಡಿದೆ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ನೋಡಿದಾಗಲೂ ಇದು ನಿಜವೆನ್ನಿಸುತ್ತದೆ. ತಾತ್ವಿಕ ನೆಲೆಗಟ್ಟಿನಲ್ಲಿ ನೋಡಿದಾಗಲೂ ಇದು ಸತ್ಯವೆನ್ನಿಸುತ್ತದೆ. ಮಹೋನ್ನತ ಕವಿತೆಯನ್ನು ಕರುಣಿಸಿದ 'ಬೇಂದ್ರೆ' ಎಂಬ ನಿಗೂಢ ದಾರ್ಶನಿಕನಿಗೆ ನನ್ನ ಕೋಟಿ ನಮನ.

ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾ...
ನಾನು ನೀನಿನ
ನೀನಾನಿಗೆ
ಬೇನೆ ಏನೋ?
ಜಾಣಿನಾ...
ಚಿತ್ತೀಮಳಿ, ತತ್ತಿ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತಿಯೋ ಮಗನ
ಅಂತ ಕೂಗಿದರು
ಸಾವೀ ಮಗಳು, ಭಾವಿ ಮಗಳು ಕೂಡಿ
ಜಗ, ಅಪ್ಪಾ ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ
ಶ್ರೀ ಗುರುದತ್ತ ಅಂದ

ನಾಕುತಂತಿ ಅಂಬಿಕಾತನಯದತ್ತ
ಮೂಲ: ಅಂತರ್ಜಾಲ

Sunday, November 30, 2014

ಹೊತ್ತಿತೋ ಹೊತ್ತಿತು ಕನ್ನಡದ ದೀಪ

ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ
ಹೊತ್ತಿತೋ ಹೊತ್ತಿತು ಕನ್ನಡದ ದೀಪ

ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ
ಹರ್ಷ ಉಕ್ಕಿಸುವಂತೆ ಶೋಭಾಯಮಾನ
ಕನ್ನಡದ ಮನೆಯಾಗೇ ಜ್ಯೋತಿರ್ನಿಧಾನ
ಕನ್ನಡದ ಪ್ರಾಣ ಕನ್ನಡದ ಮಾನ

ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿನ್ನು ನಿಡುಬತ್ತಿಯಾಗಿ
ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ
ನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿ

ಚಿರಕಾಲ ಬೆಳಗಲಿ ಕನ್ನಡದ ದೀಪ
ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ
ಭಾರತಕೆ ಬಲವಾಗಿ ಭವ್ಯ ಪ್ರದೀಪ
ಕಳೆಯುತ್ತ ತಾಪ ಬೆಳೆಸುತ್ತ ಸೈಪ

ಡಾ|| ಸಿದ್ದಯ್ಯ ಪುರಾಣಿಕ
ಈ ನಾಡಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Saturday, November 29, 2014

ಸತ್ತ ಶವದ ಮುಂದೆ ಕುಳಿತುಕೊಳ್ಳಬಹುದು, ಆದರೆ ...

ಸತ್ತ ಶವದ ಮುಂದೆ ಕುಳಿತುಕೊಳ್ಳಬಹುದು
ಆದರೆ, ಕೊಳೆತ ಮನಸ್ಸುಗಳ ಮುಂದೆ
ಕುಳಿತುಕೊಳ್ಳಲು ಸಾಧ್ಯವಿಲ್ಲ.

Saturday, November 1, 2014


ಸ್ವಾತಂತ್ರ್ಯ ಪೂರ್ವದಲ್ಲಿ ನೆರೆಹೊರೆಯ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡದ ಪ್ರದೇಶಗಳು ೧೯೫೬ರ ನವಂಬರ್ ೧ ರಂದು ಏಕೀಕರಣಗೊಂಡು, ವಿಶಾಲ ಮೈಸೂರು ರಾಜ್ಯ ಉದಯವಾಯಿತು. ಕನ್ನಡಿಗರ ಸಮಗ್ರತೆಯನ್ನು ಸಂಕೇತಿಸುವಂತೆ ೧೯೭೩ರ ನವಂಬರ್ ೧ ರಂದು ವಿಶಾಲ ಮೈಸೂರು ರಾಜ್ಯವು "ಕರ್ನಾಟಕ" ಎಂದು ಮರುನಾಮಕರಣಗೊಂಡಿತು. ಪ್ರತಿ ವರ್ಷ ನವಂಬರ್ ೧ ರಾಜ್ಯೋತ್ಸವ ದಿನ, ಕನ್ನಡಿಗರೆಲ್ಲರಿಗೂ ಒಂದಾಗಿ ನಲಿವ ಸುದಿನ. ಒಟ್ಟಾಗಿ ಬೆಳೆದು ಬೆಳೆಯಲು ಸ್ಪೂರ್ತಿಯ ಕ್ಷಣ.

"ಕರ್ನಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ, ಶಕ್ತಿ ಕಣಾ
ತಾಯಿ ಕಣಾ, ದೇವಿ ಕಣಾ
ಬೆಂಕಿ ಕಣಾ, ಸಿಡಿಲು ಕಣಾ"

- ರಾಷ್ಟ್ರಕವಿ ಕುವೆಂಪು