ಸ್ವಾತಂತ್ರ್ಯ ಪೂರ್ವದಲ್ಲಿ ನೆರೆಹೊರೆಯ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ
ಕನ್ನಡದ ಪ್ರದೇಶಗಳು ೧೯೫೬ರ ನವಂಬರ್ ೧ ರಂದು ಏಕೀಕರಣಗೊಂಡು, ವಿಶಾಲ ಮೈಸೂರು ರಾಜ್ಯ
ಉದಯವಾಯಿತು. ಕನ್ನಡಿಗರ ಸಮಗ್ರತೆಯನ್ನು ಸಂಕೇತಿಸುವಂತೆ ೧೯೭೩ರ ನವಂಬರ್ ೧ ರಂದು ವಿಶಾಲ ಮೈಸೂರು ರಾಜ್ಯವು
"ಕರ್ನಾಟಕ" ಎಂದು ಮರುನಾಮಕರಣಗೊಂಡಿತು. ಪ್ರತಿ ವರ್ಷ ನವಂಬರ್ ೧ ರಾಜ್ಯೋತ್ಸವ ದಿನ,
ಕನ್ನಡಿಗರೆಲ್ಲರಿಗೂ ಒಂದಾಗಿ ನಲಿವ ಸುದಿನ. ಒಟ್ಟಾಗಿ ಬೆಳೆದು ಬೆಳೆಯಲು ಸ್ಪೂರ್ತಿಯ ಕ್ಷಣ.
"ಕರ್ನಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ, ಶಕ್ತಿ ಕಣಾ
ತಾಯಿ ಕಣಾ, ದೇವಿ ಕಣಾ
ಬೆಂಕಿ ಕಣಾ, ಸಿಡಿಲು ಕಣಾ"
- ರಾಷ್ಟ್ರಕವಿ ಕುವೆಂಪು
No comments:
Post a Comment